Sunday, May 12, 2013

ಶಿವ!!ಶಿವ!!

 ಏಕೆ ಕೊಟ್ತೆಯೋ ಮನವ
ಏಕೆ ಕೊಟ್ಟಿರುವೆ ಈ ತನುವ ?
ಎಲ್ಲಿಲ್ಲದ ಸಂಕಟ  ಬರಮಾಡುವಾ  ಶಿರವ ?

ತನುಮನದ ಕಾಟಕೆ ಬಳಲಿ  ನೊಂದ ಈ ಹೃದಯ
ಏನ  ಹೇಳಲಿ  ಕಂಡುಕೊಂಡ ನಿಜದ ಆ  ಕಥೆಯ?

ಮರಳಿ ನೆನಪಿಗೆ  ಬಂದ,  ತಾಳಲಾರದಾ  ವ್ಯಥೆಯ
ಕಿತ್ತು ಹಾಕಿದ ನಿನ್ನ, ಕೆಚ್ಚೆದೆಯ ಆ ಪ್ರಳಯ!

ನಿನ್ನಾಟವ ನೋಡಿ, ಚಕಿತನಾದೆನೋ ಈಗ
ಕೈಬಿಡದೆ ನಡೆ ಮುಂದೆ, ಬರಲಾರೆನೇ  ಬೇಗ?

ನಿನ್ನ ಸ್ತುತಿವೊಂದಿರಲಿ, ಅದ ಮಾತ್ರ ಕೊಡು  ವರವ
ನಿನ್ನ ಕರುಣೆಗೇನ ಕೊಡಲಿ, ನಾನಂತು  ಬಡವ
 ಮಗುವಂತೆ ಕಾಪಾಡು  ನನ್ನಪ್ಪ ನೀನೆ  ಶಿವಶಿವ.











 


 


No comments: